Thursday, November 8, 2007
ನಿತ್ಯ ಚೇತನ ಬೆಳಕು ಬೆಳಗಲಿ
ಓಂ ಇವತ್ತು ಬಳಿ ಚಕ್ರವರ್ತಿಯ ವಧೆಯಾದ ದಿನ .ನಾನು ಹುಟ್ಟಿದ ದಿನ(ಈ ಸಾರಿ ನಾನು ಹುಟ್ಟಿದ ಇಂಗ್ಲೀಷ್ ಮತ್ತೆ ಹಿಂದು ಎರಡು ದಿನಗಳು ಸೇರಿವೆ). ಇನ್ಯಾರೋ ಭೂಮಿಯ ಋಣ ಕಡಿದುಕೊಂಡ ದಿನ..ಈ ಬಲಿ ಚಕ್ರವರ್ತಿ, ನಾನು, ಇನ್ಯಾರೋ ಅಂದರೆ ಏನು ? ಇವು ಒಂದೇ ಬಿಂದುವಿನ ನಾಮ, ಸರ್ವನಾಮಗಳಷ್ಟೇ ಅಲ್ಲವೇ?ಇಲ್ಲದಿದ್ದರೆ ಒಬ್ಬರಿಗೆ ಸಂತೋಷ ಕೊಡುವ ದಿನ ಇನ್ನೊಬ್ಬರಿಗೆ ದುಃಖ ಆಗುವದಾದರೂ ಹೇಗೆ? ಹುಟ್ಟಿದ ಮನೆಯೂ ಸೂತಕದ ಮನೆ..ಸತ್ತ ಮನೆಯೂ ಸೂತಕದ ಮನೆ.ನೋಡಿ ಹಿರಿಯರು ಮಾಡಿರುವ ಸಮಷ್ಟಿಯ ವ್ಯಾಖ್ಯಾನ.ಅದೇ ಬದುಕು.ಇದು ಎಂದೂ ಸತ್ಯ ಕೂಡ ಇದೆ. ನಮ್ಮ ಅಜ್ಞಾನದ ಕಣ್ಣಿನಿಂದ ನಾವು ಆ ಸತ್ಯವನ್ನು ಕಾಣಲು ಸಾಧ್ಯವಾಗದೇ ಈ ಬೇಧ ಭಾವನೆಗೆ ಎಡೆ ಮಾಡಿ ಕೊಟ್ಟಿರಬೇಕು. ಆದರೂ ನನಗೆ ಇಂದು ಯಾಕೋ ಆ ಸಮಭಾವದ ಸ್ವಲ್ಪ ಭಾಸವಾದರೂ ಆಗಿದೆ.ತೀರ ಸಮೀಪದ ದೊಡ್ಡಪ್ಪನವರು ಹೊರಟು ಹೋದರು ಎಂದು ಅಣ್ಣ, ತಂಗಿ ಹೇಳಿದಾಗ ಎದೆಯಲ್ಲಿ, ತಲೆಯಲ್ಲಿ, ಯಾವುದೇ ಬದಲಾವಣೆಗಳೇ ಆಗಲಿಲ್ಲ. ಇದು ಸರಿಯೋ ತಪ್ಪೋ ಅಂತೂ ನನ್ನ ಕಣ್ಣಲ್ಲಿ ಇಲ್ಲಿಯವರೆಗೂ ಒಂದು ಹನಿ ನೀರು ಉದುರಿಲ್ಲ. ಅಥವಾ ಬಹುಶ: ನನಗೆ ಇನ್ನು ಅವರ ಅಗಲುವಿಕೆಯ ಅರಿವು ಆಗಿಲ್ಲದೇ ಇರಬಹುದು.ಅಂತೂ ಸಾಗುತ್ತಿದೆ ಕಾಲನ ಯಾತ್ರೆ
Subscribe to:
Post Comments (Atom)
No comments:
Post a Comment