Saturday, January 6, 2018

Caring for Customer



We in corporate world care for customer experience and we talk about it all the time. But how many times do we really cater on our own without being made accountable or having that as our action item? 2 days back when I took the Smartbus (public transport in Detroit metro area) to work ,I told the driver that there is a stop near my office which he could not see as there was another bus laying over there. Also I mentioned to him that it is not a problem for me since I can walk one block without any problem. This being new route may be he was not sure. He asked me to remind me next time. Next day I requested and went to inform the driver. He said he figured it out that there is indeed a stop for this route and he stopped. I was amazed that he kept that conversation in mind and looked for it in his next trip and helped the customer next day . I am sure nobody in his organization has asked him or appreciated him for this extra step. That is what we need when we serve ourselves or customers. I hope that we all will be more caring in the new year..

Thursday, January 9, 2014

ಇಂದು ನನ್ನ ಸಂಬಂಧಿಯೊಬ್ಬರು ಪ್ರೈಯೋರಿಟಿ ಇದರ ಕನ್ನಡದ ಅನುವಾದ ಏನೆಂದು ಕೇಳಿದರು. ಕನ್ನಡ ಮಾಧ್ಯಮದ ನನಗೆ ಥಟ್ಟನೆ ಹೊಳೆದಿದ್ದು ಆದ್ಯತೆ. ಇದು ಅಷ್ಟು ಸಹಜವಾಗಿ ನನಗೆ ನೆನಪಿಗೆ ಬರಲು ಕನ್ನಡಕ್ಕೆ ನಾನು ಕೊಟ್ಟ ಆದ್ಯತೆಯ ಸ್ಥಾನ ಇರಬೇಕೇನೋ ಎನಿಸಿತು. ಇದರ ಬಗ್ಗೆಯೇ ಚರ್ಚೆ ಮುಂದುವರಿದಾಗ ಅನಿಸಿದ್ದು " ನಾವು ಬಹಳಷ್ಟು ಸಲ ಪ್ರತಿಯೊಂದು ವಸ್ತು, ಮನುಷ್ಯ ಸಂಬಂಧ, ದೇಶ, ಕೆಲಸ, ನಮ್ಮ ಭಾಷೆ ಎಲ್ಲವುಗಳಿಗೆ ನಮ್ಮ ಹೃದಯಕ್ಕೆ ಎಷ್ಟು ಹತ್ತಿರವೋ ಆ ಕ್ರಮದಲ್ಲಿ ಅವುಗಳಿಗೆ ಒಂದು ಸ್ಥಾನ ಕೊಟ್ಟು ಅದರ ಬಗ್ಗೆ ಇರುವ ಪ್ರೀತಿ, ಆಸಕ್ತಿಯನ್ನು ಅದೇ ಕ್ರಮದಲ್ಲಿ ತೋರ್ಪಡಿಸುತ್ತೇವೆ." ಇದಕ್ಕೆ ವ್ಯತಿರಿಕ್ತವಾಗಿ ಕೆಲವೊಂದು ವಿಷಯದಲ್ಲಿ ಬಲವಂತವಾಗಿ ನಮ್ಮ ಆದ್ಯತೆಯನ್ನು (ಕರ್ತವ್ಯ ಎನ್ನಬಹುದು) ನಿರ್ವಹಿಸುತ್ತೇವೆ.ಎಷ್ಟೋ ಸಾರಿ ಈ ಆದ್ಯತೆಯನ್ನು ಸರಿಯಾಗಿ ತೂಗಿಸಿಕೊಂಡು ಹೋಗಲು ನಮಗೆ ಗುರಿಯ ಆಕರ್ಷಣೆ ಬೇಕಾಗಬಹುದು , ಅಥವಾ ನಿತ್ಯದ ಅನಿವಾರ್ಯತೆ ನೂಕಬಹುದು. ಇದೆರಡರಲ್ಲಿ ಯಾವದೂ ಇಲ್ಲದೇ ಹೋದರೆ ಅಲ್ಲಿ ನಮ್ಮ ಪ್ರಗತಿ ಕುಂಠಿತವಾಗಬಹುದು, ಇಲ್ಲ ನಮ್ಮ ಜೀವನದ ಮಾರ್ಗವೇ ವಿಮುಖವಾಗಬಹುದು ಇಲ್ಲ ನಾವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಇದು ನಮಗೆ ಎಷ್ಟೋ ಸಾರಿ ಎದುರಾದರೂ ಮತ್ತೆ ಮತ್ತೆ ಇಂಥ ಸಂಧಿಗ್ದಕ್ಕೆ ಸಿಲುಕುತ್ತಲೇ ಇರುತ್ತೇವೆ. ಜೀವನ ಸ್ವಲ್ಪ ಮಟ್ಟಿಗೆ ಅನಿಶ್ಚತೆ ಎನಿಸಿದರೂ ಹೆಚ್ಚಿನ ಸಲ ಈ ಆದ್ಯತೆಯನ್ನು ಮೊದಲೇ ನಿಗದಿಪಡಿಸಿದರೆ ಸಹಾಯವಾಗುತ್ತದೆ ಎನ್ನುವದು ಸಾಮನ್ಯವಾದ ನಂಬಿಕೆ ಮತ್ತು ಅನುಭವ. ಒಂದು ಸಾರಿ ನಾವು ಅದನ್ನು ಪಟ್ಟಿ ಮಾಡಿಟ್ಟ ಮೇಲೆ ಅದರ ರೀತಿ ನಡೆಯುವುದು ಮೊದ ಮೊದಲು ಕಷ್ಟ ಎನಿಸಿದರೂ ಅದರ ಲಾಭ ತಿಳಿಯುತ್ತಿದ್ದಂತೆ ನಾವು ಅದರ ಬೆಂಬಲಿಗರಾಗುತ್ತೇವೆ. ಯಾವುದರ ಆದ್ಯತೆ ಹೆಚ್ಚೋ ಅದಕ್ಕಾಗಿ ನಮ್ಮ ಹೆಚ್ಚಿನ ಶಕ್ತಿ, ವೇಳೆ ಮತ್ತು ಆಸಕ್ತಿಯನ್ನು ಕೊಡಬೇಕಾಗುತ್ತದೆ. ಅದಕ್ಕಾಗಿ ಒಂದೊಂದು ಸಲ ನಾವು ಇಕ್ಕಟ್ಟಿನ ಸ್ಥಿತಿಯಲ್ಲಿ ಬೀಳುತ್ತೇವೆ. ಇಂಥ ಸಮಯದಲ್ಲಿ ನಾವು ಅದರ ಆದ್ಯತೆಯನ್ನು ತಾತ್ಕಾಲಿಕವಾಗಿ ತಗ್ಗಿಸಿ ಮತ್ತೆ ಅದನ್ನು ಮುಂಚೂಣಿಯಲ್ಲಿ ತರಬೇಕು. ಆಗ ಆ ಗುರಿ, ಉದ್ದೇಶ ತನ್ನ ಗುರುತನ್ನು ನಮ್ಮ ಜೊತೆಗೆ ಹಂಚಲು ಶುರು ಮಾಡುತ್ತದೆ.




ನಮೇಲಿನ ವಾಕ್ಯಗಳು ನನ್ನವೇ ಏನೋ ಅನ್ನುವಷ್ಟು ಹಿಂದೆ ಉಳಿದು ಬಿಟ್ಟಿದ್ದೇನೆ ಈ  5ವರ್ಷಗಳಲ್ಲಿ . ಯಾಕೆ ಆಲಸ್ಯತನ ?ಯಾಕೀ ಅಳಕ್ಷ್ಯತೆ ? ಇನ್ನಾದರೂ ಎದ್ದು ಗುರಿ ಮುಟ್ಟುವ ಬಲ ಬರಲಿ. 

Thursday, October 16, 2008

ಕಾಲ ಓಡುವುದ ಬಲ್ಲ -->

ಹೌದು ನನ್ನ ಬ್ಲಾಗನ್ನು ನೋಡದೆ ಎಷ್ಟೋ ದಿನಗಳಾದವು. ಇವತ್ತು ಇನ್ನೊಬ್ಬ ಮಿತ್ರರಿಂದ ಬಂದ ಇಮೇಲ್ ನಲ್ಲಿ ಅವರ ಬ್ಲಾಗ್ ಕೊಂಡಿ ಇತ್ತು. ಅವರು ನನಗೆ ನೋಡಿ ನನ್ನ ಅಭಿಪ್ರಾಯ ತಿಳಿಸಲು ಹೇಳಿದ್ದರು. ಆಗ ನನ್ನ ಬ್ಲಾಗ್ ಕಥೆ ಏನಾಗಿದೆ ಎಂದು ನೋಡಲು ಹೋದೆ. ಮೊದಲು ಒಂದೇ ಒಂದು ಅಕ್ಷರ ತಪ್ಪಾಗಿ ಟೈಪ್ ಮಾಡಿದ್ದಕ್ಕೆ ಒಂದಷ್ಟು ಕಿಡಿಗೇಡಿಗಳು ಧರ್ಮದ ಹೆಸರಲ್ಲಿ ಸೇರಿಸಿಟ್ಟ ತೀಕ್ಷ್ಣ ವಿಚಾರಗಳು ಎದುರಾಗಿ ಒಂದು ಕ್ಷಣ ಎದೆ ಝಲ್ಲ ಎಂದಿತು. ನಂತರ ಪುನಃ ಸರಿಯಾಗಿ ಬರೆದಾಗ ಬಂತು. ಅದರಲ್ಲಿ ೨-೩ ಜನ ಬಿಟ್ಟು ಹೋದ ಅಭಿಪ್ರಾಯಗಳು ಇದ್ದವು. ನಾನು ಅವತ್ತಿನಿಂದ ಇಂದಿನವರೆಗೆ ಅದನ್ನು ತೆಗೆದು ಕೂಡ ನೋಡಿರಲಿಲ್ಲ. ಆಗ ಅನಿಸಿದ್ದು, 'ಕಾಲ ಓಡುತ್ತಲೇ ಇರುತ್ತದೆ ಯಾರ ಅಪ್ಪಣೆಗೂ ಕಾಯದೆಯೇ.ಯಾರ ನೋವಿನ, ನಲಿವಿನ, ಕ್ಷಣಗಳನ್ನು ಧೀರ್ಘವಾಗಿಸದೆಯೇ. ನಾವು ಅದರ ಜೊತೆ ಹೆಜ್ಜೆ ಹಾಕಿ ಬಿಟ್ಟರೆ ಎಷ್ಟು ಚಂದ ' ಅಂತ.ಅದರ ಆಧೀನದಲ್ಲಿರದೆ ಸಮಾನಾಂತರದಲ್ಲಿ ನಡೆದರೆ ಅದು ಜೊತೆಗಾರ,ಅನುಭವಗಳ ಆಗರ ಅಲ್ಲವೇ?ಏನೇ ಬಂದರೂ ಕಾಲನ ಹಿಂದೆ ಉಳಿಯಬಾರದು.ಅದರಿಂದ ನಷ್ಟ ನಮಗೇ.

ಅಲ್ಲಿಂದ ಇಂದಿನವರೆಗೆ ನಾನು ಕನಿಷ್ಠ ವಾರಕ್ಕೊಂದರಂತೆ ಮನಸ್ಸಿನಲ್ಲಿ ಸುತ್ತು ಹೊಡೆಯುವ ವಿಚಾರಗಳನ್ನು ಅಕ್ಷರಗಳಲ್ಲಿ ಹೆಣೆದಿದ್ದರೆ ಇಲ್ಲವೆಂದರೂ ೫೦ ಬೇರೆ ಬೇರೆ ಪುಟಗಳಿರುತ್ತಿದ್ದವು. ನನ್ನನ್ನೇ ನಾನು ಅವಲೋಕಿಸಿಕೊಳ್ಳಲು ಸರಳವಾದ ಕನ್ನಡಿ ಇರುತ್ತಿತ್ತು.ಹೀಗೆ ನಾನು ವ್ಯರ್ಥಯಿಸಿದ ಕಾಲವೇ ಒಂದು ಸಫಲ ಜೀವನ ಆಗಲು ಸಾಧ್ಯವಿತ್ತು.ಬಾರಿ ಬಾರಿ ಇಮೇಲ್ ಚೆಕ್ ಮಾಡುತ್ತಾ,ಒಂದೇ ರೀತಿಯ ಸುದ್ದಿ ಇರುವ ಎಲ್ಲ ಪತ್ರಿಕೆಗಳನ್ನು ಓದುತ್ತ ಹಾಳುಗೆಡಹುವ ಸ್ವಲ್ಪ ಸಮಯವಾದರೂ ಇಂಥ ಆತ್ಮತೃಪ್ತಿಯ, ಸ್ವಾಧ್ಯಯದ ಲಾಭಕ್ಕೆ ಎಡೆ ಮಾಡಿ ಕೊಟ್ಟಿರುತ್ತಿತ್ತು.

Thursday, November 22, 2007

ಬೀಳ್ಕೊಡುವ ದುಃಖ

ಇಂದು ದಾಟ್ಸ್ ಕನ್ನಡ.ಕಂ ನಲ್ಲಿ ತ್ರಿವೇಣಿಯವರ ವಿದಾಯದ ಲೇಖನ ಓದುತ್ತ ಹೀಗನಿಸಿತ್ತು." ಅಳುವುದು ನನಗೆ ಅಸಹ್ಯವೆಂದು ತಿಳಿದಿದ್ದರೂ ಅದು ತಾನೇ ತಾನಾಗಿ ಹೊರಬಿದ್ದ ಘಟನೆಗಳು ಎಷ್ಟೋ? ಮೊದಲ ಸಲ ಅಷ್ಟೊಂದು ನೋವಾಗಿ ಅತ್ತಿದ್ದು ಅಣ್ಣ ಸೈನಿಕ ಶಾಲೆಗೆ ಹೋದಾಗ,ಅಮ್ಮ ಅತ್ತದ್ದನ್ನು ನೋಡಲಾಗದೆ ನಾನು ಮತ್ತೆ ತಂಗಿ ರಾತ್ರಿ ಅಪ್ಪ ಅಮ್ಮರ ಪಕ್ಕ ಆಚೆ ಮುಖ ಮಾಡಿ ಮಲಗಿ ಅತ್ತದ್ದು ಅಪ್ಪನಿಗೆ ಹೇಗೋ ತಿಳಿದು ಬಿಟ್ಟಿತ್ತು. ಅದಾದ ಮೇಲೆ ಅತ್ತಿದ್ದು ನಮ್ಮ ಮನೆಯ ನಾಯಿಗೆ ಹುಶಾರಿರದ ದಿನ.ಆ ಪರಿ ನಾನು,ಅಣ್ಣ ತಂಗಿ ಮೂವರೂ ಅತ್ತಿದ್ದನ್ನು ನೋಡಿ ನಮ್ಮ ಶಾಲೆಯಲ್ಲಿ ಶಿಕ್ಷಕರು ,ಗೆಳತಿಯರು ನಾಯಿ ಎಂಬುದನ್ನು ತಪ್ಪಾಗಿ ತಿಳಿದು ಆಯಿ(ಅಜ್ಜಿ)ಗೆ ಹುಶಾರಿಲ್ಲವೆಂದು ತಿಳಿದಿದ್ದರು. ಮುಂದೆ ೧೦ನೇ ತರಗತಿಯಲ್ಲಿದ್ದಾಗ ಬೀಳ್ಕೊಡುವ ದಿನ ಅವತ್ತು ನನಗೆ ತಿಳಿಯದೆಯೇ ಕಣ್ಣಲ್ಲಿ ನೀರು ಬಂದು ಬಿಟ್ಟಿತ್ತು.ನಾನು ಆ ಪರಿ ಕಿತ್ತಾಡಿ ತೆಗೆದ ೩ ವರ್ಷಗಳು ಆ ಕೊನೆಯ ದಿನಕ್ಕೆ ತದ್ವಿರುದ್ಧವಾಗಿದ್ದವು.ಆಮೇಲೆ ಗೆಳತಿಯರು ನಾನು ತುಂಬಾ ಚೆನ್ನಾಗಿ ಮಾತನಾಡಿದೆ ಎಂದೂ, ನನ್ನ ಭಾವನೆ ನೋಡಿ ಅವರಿಗೆಲ್ಲ ಅಳು ಬಂತೆಂದೂ ಹೇಳುವದನ್ನು ಕೇಳಿ ನನಗೆ ನಾಚಿಕೆ, ನನ್ನ ಬಗ್ಗೆ ಕೀಳರಿಮೆ ಶುರು ಆಗಿತ್ತು.ನಾನು ಹೇಳಿದ್ದು ನಾನು ಅತ್ತಿದ್ದು ಶಾಲೆ ಬಿಟ್ಟು ಹೋಗಲು ಅಲ್ಲ ನನಗೆ ಪೂರ್ವಭಾವಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದದ್ದಕ್ಕೆ ಎಂದು ಸಾವರಿಸಿಕೊಂಡೆ .ಆದರೂಈಗ ಅನಿಸುತ್ತೆ ಅಳುವುದು ಮಾನವಸಹಜ ಎಂದು. ಮುಂದೆ ಧಾರವಾಡದಲ್ಲಿ ಒಬ್ಬಳೇ ಇರಬೇಕಾದಾಗ ಅತ್ತಿದ್ದು. ಎಂಜಿನೀಯರಿಂಗ್ ಮುಗಿಸಿ ಬಂದ ದಿನ ಅಷ್ಟೊಂದು ಓಡಾಡಿ ನಮ್ಮೂರಿಗೆ ಹೋಗುವ ದಿನ ಹತ್ತಿರವಯಿತೆಂದು ಖುಷಿಯಿಂದ ಅಪ್ಪನ ಜೊತೆ ಪರೀಕ್ಷೆ ಮುಗಿದ ದಿನವೇ ಓದಿ ಬಂದಿದ್ದೆ.ಆದರೂ ಅವತ್ತು ಬಂದು ನನಗೆ ಅರಿವಿಲ್ಲದೆ ಇಡೀ ರಾತ್ರಿ ಅತ್ತು ಬಿಟ್ಟಿದ್ದೆ.ಮನೆಯಲ್ಲಿ ಯಾರಿಗೂ ನನ್ನನ್ನು ರಮಿಸಲು ಸಾಧ್ಯವಾಗದೇ ಹೋಯಿತು.ಮತ್ತೆ ನನ್ನ ಗೆಳತಿ ಶೈಲಾ ಹಾಸ್ಟೆಲ್ ಬಿಟ್ಟು ವಾಪಸ್ ಊರಿಗೆ ಹೋದ ದಿನ ಕೂಡ ಅಷ್ಟೇ ..ಯಾಕೋ ಅಳುವುದು ಒಂದು ರೀತಿಯ ಹಿತದ ಅನುಭವವೇನೋ ಅನಿಸುವಷ್ಟು ಹತ್ತಿರವಾಯಿತು.ಹೀಗೆ ಕಣ್ಣಿಗೆ ಕಾಣುವ ಕಷ್ಟ ದು:ಖ ನೋಡಿ ಮನಸ್ಸು ದು:ಖಿಯಾಗಿ ಕಹಿಯಾಗಿ, ಖಿನ್ನವಾಗಿ ಅತ್ತ ದಿನಗಳೆಷ್ಟೋ?ಕೆಲವೊಮ್ಮೆ ನನ್ನ ಭ್ರಮೆಯಿಂದಾಗಿರುವ ನೋವಿಗಾಗಿ ಅತ್ತ ಕ್ಷಣಗಳೆಷ್ಟೋ? ಆದರೆ ಅದು ಮನಸ್ಸನ್ನು ಸ್ವಚ್ಛಗೊಳಿಸುವ ಒಂದು ಸರಳ ಮಾರ್ಗವೆಂದು ಈಗ ಅನಿಸುತ್ತಿದೆ.

Wednesday, November 14, 2007

ಎಲ್ಲರ ಅಮ್ಮ ಶ್ರೇಷ್ಥಳು

ನಮ್ಮನ್ನು ಹೆತ್ತ ತಾಯಿ ನಮ್ಮ ಭಾಗ್ಯದ ಒಂದು ಭಾಗ. ಇದು ಜಗತ್ತಿನ ಪ್ರತಿ ಜೀವಿಯ ಅನುಭವ. ನಾನು ಚಿಕ್ಕವಳಿದ್ದಾಗ ಅಮ್ಮ ಸ್ವಲ್ಪ ಕಠಿಣವಾಗಿ ಸಿಸ್ತನ್ನು ಕಲಿಸುತ್ತಿದ್ದರು.ಆಗೆಲ್ಲ ಬೇರೆಯವರ ತಾಯಂದಿರು ಅವರನ್ನು ಅಷ್ಟೊಂದು ಸಲುಗೆಯಿಂದ ಬೆಳೆಸಿದ್ದನ್ನು ನೋಡಿ ಅನಿಸುತ್ತಿತ್ತು ಅವರ ಅಮ್ಮ ಒಳ್ಳೆಯವರೆಂದು.ಆದರೆ ನಾನು ದೊಡ್ಡವಳು ಆಗುತ್ತಿದ್ದಂತೆ, ಈ ಜಗತ್ತಿನ ಅನುಭವ ಹೆಚ್ಚಾದಂತೆಲ್ಲ ಈಗ ಅನಿಸುತ್ತಿದೆ ನಾವು ಪಡೆದಿರುವ ತಾಯಿಗಿಂತ ಶ್ರೇಷ್ಠ ತಾಯಿ ಇನ್ನಾರೂ ಸಿಗುವುದಕ್ಕೆ ಸಾಧ್ಯ ಇಲ್ಲವೆಂದು.ಬುದ್ಧಿ ಕಲಿಸಲು ಅವರು ನಮ್ಮ ಜೊತೆ ಕಠಿಣವಾಗಿ ಇದ್ದಿರಬಹುದು ಆದರೆ ನಾವು ಬೆಳೆದು ಬದುಕನ್ನು ಇಷ್ಟು ಹತ್ತಿರದಿಂದ ನೋಡಲು ಕಲಿಸಿ ಅದರ ನಿಜವಾದ ಅರ್ಥ ತಿಳಿಸಲು ಪಟ್ಟ ಕಷ್ಟ ಇಂದು ನನಗೆ ತಿಳಿಯುತ್ತಿದೆ. ಬರೀ ಬಾಹ್ಯ ಸುಖವೇ ಸುಖವಲ್ಲ ಎಂಬುದನ್ನು ಅರುಹಿದ ಪ್ರತಿಯೊಬ್ಬರ ತಾಯಿಯೂ ವಂದನೆಗೆ ಅರ್ಹಳು.ನಮ್ಮ ಅಜ್ನಾನಕ್ಕೆ ನಿಲುಕಿದಷ್ಟೆ ವಿಚಾರದಲ್ಲಿ ನಾವು ಯಾವತ್ತಾದರೂ ತಾಯಿಯನ್ನು ಹೀಯಾಳಿಸಿದ್ದರೆ ಇಂದು ಅದಕ್ಕೆ ಕ್ಷಮೆ ಕೇಳಿ ಬದುಕಿನ ಆನಂದವನ್ನು ಹಂಚಿಕೊಳ್ಳಬೇಕಿದೆ.ಅವರ ನಿಸ್ವಾರ್ಥ ಪ್ರೀತಿಗೆ ಕೃತಜ್ಞತೆ ಸಲ್ಲಿಸಬೇಕಿದೆ. ಇವತ್ತು ಯಾಕೆ ಹೀಗೆ ಅನಿಸುತ್ತಿದೆಯೋ ಗೊತ್ತಿಲ್ಲ .ಆದರೂ ಅಂಥ ಒಂದು ಅರಿವಾದರೂ ನನ್ನಲ್ಲಿ ಮೂಡಿದ್ದು ಒಳ್ಳೆಯ ಹಾದಿಗೆ ನಾಂದಿ ಏನೋ:-)
ಒಂದು ಅರಿವಾದರೂ ಮೂಡಿದ್ದು ಒಳ್ಳೆಯ ಹಾದಿಗೆ ನಾಂದಿ ಏನೋ:-)

Monday, November 12, 2007

ಗೆಳೆತನದ ಸುವಿಶಾಲ ಆಲದಡಿ......

ನನಗೇಕೋ ಈ ಗೆಳೆತನದ ಹುಚ್ಚು ಚಿಕ್ಕಂದಿನಿಂದಲೂ ಸ್ವಲ್ಪ ಅತೀಎನಿಸುವಷ್ಟೇ.ಆಗಲೂ ನಮ್ಮ ಮನೆಯ ಮಾಲೀಕರ ಮಕ್ಕಳಿಗೆ ಅಭ್ಯಾಸ ಮಾಡಲು ಮನೆಗೆ ಕರೆದು ಅವರ ಗೆಳೆತನ ಮಾಡಿಕೊಳ್ಳುತ್ತಿದ್ದೆ.ಶಾಲೆಯಲ್ಲಿ ಅಭ್ಯಾಸದ ವಿಷಯವಾಗಿ ಏನು ಬೇಕೋ ಎಲ್ಲವನ್ನೂ ತೋರಿಸಿ/ಕೊಟ್ಟು ಗೆಳತಿಯರನ್ನು ಮಾಡಿಕೊಳ್ಳುತ್ತಿದ್ದೆ. ಮನೆಗೆ ಎಷ್ಟೋ ಹುಡುಗಿಯರನ್ನ ಕರೆದು ಅಮ್ಮನ ಕೈಯಿಂದ ತಿಂಡಿ ಕೊಡಿಸಿ ಅವರ ಗೆಳೆತನಕ್ಕಾಗಿ ಹವಣಿಸುತ್ತಿದ್ದೆ.ಮನೆಯಲ್ಲಂತೂ ತಂಗಿ, ಅಣ್ಣ ಇದ್ದರು..ಅಪ್ಪ ಸಾಕಷ್ಟು ಸಲುಗೆಯಿಂದಲೇ ಬೆಳೆಸಿದರೂ ಈ ಗೆಳತನದ ಚದುರಂಗ ಬಲಕ್ಕೆ ಅದೆಲ್ಲ ಸಾಟಿಯೇ? ಯಾರ ಜೊತೆಗೋ ಜಗಳ ಆದಾಗ ನನ್ನ ಪರವಹಿಸಲು ಅವರೇ ಬೇಕಿತ್ತು.ಆಟಕ್ಕೆಲ್ಲ ಗುಂಪು ಆದಾಗ ನನ್ನ ಗುಂಪಿನಲ್ಲಿ ಬಲಿಸ್ಥರು ಇರಬೇಕಿತ್ತು.ಸುಳ್ಳು ಹೇಳಿ ಶಾಲೆ ತಪ್ಪಿಸಿ ನದಿ ,ಕೆರೆ, ಬಯಲು, ಕಾಡಿನಂತಿರುವ, ಗಿಡಗಳಿರುವ ಜಾಗಕ್ಕೆ ಹೋಗಲು ಇವರೇ ಬೇಕಿತ್ತು.ನನ್ನ ತಲೆಯಲ್ಲಿರುವ ಎಲ್ಲ ಭ್ರಮೆಗಳಿಗೆ, ಕಲ್ಪನೆಗಳಿಗೆ ಕಿವಿಯೂ ಇವರದೇ ಬೇಕಿತ್ತು..ಇಂತು ಸಾಗಿ ಎಷ್ಟೋ ಜನರನ್ನು ಗೆಳೆಯ ಗೆಳತಿ ಎಂದು ಕರೆಯುತ್ತ ತಿರುಗಿದೇನೆ ಹೊರತು ನಾನು ನಿಜವಾದ ಗೆಳಥಿಯಗಲೇ ಇಲ್ಲ ಎನಿಸುತ್ತದೆ.ಇಲ್ಲದೆ ಹೋದರೆ ನನ್ನ ನೆನಪಾಯಿತೆಂದು ನನ್ನತ್ತ ನೋಡುವ ಜನರೆಷ್ಟು? ನನ್ನಿಂದ ಯಾರಿಗೂ ಏನು ಪ್ರಯೋಜನವೇ ಇಲ್ಲದಂತಾಗಿದೆ. ಇಂಥದ್ದರಲ್ಲಿ ನನ್ನ ಬೇಜಾರು ದಿನೇ ದಿನೇ ಹೆಚ್ಚಾಗಿ ಹುಚು ಹಿಡಿಯುತ್ತಿದೆ. ಹಾಗೆಂತ ನನಗೆ ಉಳಿದಿರುವ ೧-೨ ಜನರಿಗೆ ಫೋನ್ ಮಾಡಿ ಕಷ್ಟ ಕೊಡುವದು ನನ್ನ ದುಸ್ವಾರ್ಥ ಅಲ್ಲವೇ? ಅವರಿಗೆ ನನ್ನಿಂದ ಏನಾಗಬೇಕಿದೆ?ಅವರ ಅಮೂಲ್ಯ ಸಮಯವನ್ನು ನನಗಾಗಿ ಯಾಕೆ ಹಾಳು ಮಾಡಬೇಕು?ಅವರಿಗೆ ತಮ್ಮದೇ ಜೀವನ ಭಾರ ಆಗಿದೆ .ಅವರಿಗಿರುವ ಕರ್ತವ್ಯದ ಭಾರ ಸಾಕಷ್ಟಿದೆ. ಆದರೂ ಅವರು ಮಾತಾಡದೆ ಉಳಿದಾಗ ಆಗುವ ಈ ಅಸಹನೆ ಎಷ್ಟೊಂದು ಯಾತನೆ ನೀಡುತ್ತೆ. ಎಂದು ನಾನು ಇಂಥದೆಲ್ಲ ಮೋಹದಿಂದ ಹೊರಗೆ ಬರುವೇನೋ?ಅಂಥ ದೃಢ ಮನಸ್ಸು ಎಂದು ಹದವಾಗುವದೋ???

Sunday, November 11, 2007

ಯುದ್ಧದ ಹೊರೆ

ಇವತ್ತು ನಾನು "ಸೇವಿಂಗ್ ಪ್ರೈವೇಟ್ ರ್ಯನ್ (Saving private ryan)" ನೋಡ್ತಾ ಇದ್ದೆ. ಅದು ಯುದ್ದದ ಒಂದು ತುಣುಕು. ಅದರಲ್ಲಿ ಒಬ್ಬಾತ ತನ್ನ ೩ ಜನ ಸಹೋದರರನ್ನು ಕಳೆದುಕೊಳ್ಳುತ್ತಾನೆ..ಆದ ಕಾರಣ ಮೇಲಿನ ಅಧಿಕಾರಿಗಳು ಅದು ಹೇಗೋ ಮಾಡಿ ಅವನನ್ನಾದರೂ ಈ ಯುದ್ಹವೆಂಬ ಮರಣದ ಬಲೆಯಿಂದ ದೂರ ತೆಗೆಯಲು ಹುಡುಕುತ್ತಿರುತ್ತಾರೆ..ಇದರ ಸಲುವಾಗಿಯೇ ಅವರು ಮತ್ತಷ್ಟು ಜನ ಸೈನಿಕರನ್ನು ಕಳೆದುಕೊಳ್ಳುತ್ತಾರೆ. ಡಿಸ್ಕವರಿ ಚನ್ನೆಲ್ಲನಲ್ಲಿ ನಲ್ಲಿ ನೈಸರ್ಗಿಕ ನಿಯಮದ ಬಗ್ಗೆ ಏನೋ ಮೂಡಿ ಬರುತ್ತಿತ್ತು.ಅದು ಹೇಗೆ ಆಫ್ರಿಕಾದ ಆನೆಗಳು ಎಷ್ಟೋ ದಿನಗಳವರೆಗೆ ಆ ಸ್ಯಾಂಡ್ ಸ್ಟಾರ್ಮನಲ್ಲಿ ನಡೆದು ಹೋಗಿ ನೀರನ್ನು ಹುಡುಕಬೇಕು , ಮತ್ತೆ ಆ ಪೆನಗ್ವಿನ್ನಗಳು ೫ ತಿಂಗಳ ಕಾಲ ಊಟವಿಲ್ಲದೆ ಎಲ್ಲ ಜೊತೆಯಾಗಿಯೇ ನಿಂತು ಚಳಿಯನ್ನ ತಾಲಿಕೊಳ್ಳಬೇಕು ಎಂಬುದರ ವಿವರಣೆ. ನನಗೆ ಅನಿಸಿದ್ದು.."ನಮ್ಮ ಯುದ್ಧದ ಕೈಗಾರಿಕೆಗಳಿಗಾಗಿ ನಾವು ಬಳಸುತ್ತಿರುವ ನಿಸರ್ಗಿಕ ಸಂಪನ್ಮೂಲಗಳು ಇಂಥ ಎಷ್ಟೋ ಅವಘಡಗಳಿಗೆ ಪ್ರಕೃತಿಯ ಪರ್ಯಾಯ ವ್ಯವಸ್ಥೆ ಇರಬಹುದು.ಅದನ್ನು ನಾವು ಯಾವುದೊ ಒಂದು ಸೇಡಿಗಾಗಿ ಮೂರ್ಖ ವಿಚಾರಕ್ಕಾಗಿ ಬಳಸಿ ಎಷ್ಟೋ ಜೀವಗಳನ್ನು ಬಳಿ ಕೊಡುತ್ತಿದ್ದೇವೆ. ನಾನು ಚಿಕ್ಕವಳಿದ್ದಾಗ ಈ ಮಿಲಿಟರಿಯವರ ಕೆಲಸ ಬರೀ ಯುದ್ಧ ಮಾಡಿಕೊಳ್ಳಲು ಮಾತ್ರ ಇರಬಹುದೇ ಎಂಬ ಸಂಶಯ ಬಂದಾಗಲೆಲ್ಲಾ ನನಗೆ ತಂಪನೆರೆದಿದ್ದು ನಮ್ಮ ಸಿವಿಕ್ಸ್ ಪಾಠ..ಈ ಸೈನ್ಯದ ಅವಶ್ಯಕತೆ ದೇಶದಲ್ಲಿ ತುರ್ತು ಪರಿಸ್ಥಿತಿ ತೋರಿದಾಗ, ನಿಸರ್ಗದ ಆಟಾಟೋಪಗಳು ಹೆಚ್ಚಾದಾಗ ಸಾಕಷ್ಟಿದೆ ಎಂಬುದಾಗಿತ್ತು..ಈಗಲೂ ನಾನು ಯಾವುದೇ ಸೈನಿಕನನ್ನು ನೋಡಿದಾಗ ನನ್ನ ಹಾರೈಕೆ ಆಯಾ ಅಂಥ ಒಂದು ಬಟಾಲ್ಲಿಯನ್ನವನಾಗಿರಲಿ ದೇವರೇ..ಆದರೆ ಆ ಯುದ್ಧ ಭೂಮಿಗೆ ಹೋಗುವ ಅನಿವಾರ್ಯತೆ ಇರದಿರಲಿ ಎಂಬುದು..ಅದೇ ಅಲ್ಲವೇ ಜೀವನ? ಇಲ್ಲಿ ನಮ್ಮನ್ನೆಲ್ಲ ಬೆಚ್ಚಗೆ ಕಾಪಿಟ್ಟು ಈ ಸೈನಿಕರು ತಮ್ಮ ಜೀವವನ್ನೇ ತೆರಲು ಹೊರಡಬೇಕು.. ನಮಗೆ ಈ ನಿಸರ್ಗವಿತ್ತ ಸಂಕಷ್ಟಗಳು ಸಾಲವೇ? ಯಾಕೆ ಮತ್ತೆ ಅಧಿಕಗೊಳ್ಳುತ್ತಿವೆ ಈ ಯುದ್ಧಗಳು? ಎಷ್ಟೋ ಜನರನ್ನು ಬಳಿ ತೆಗೆದುಕೊಂಡರೂ ಅದು ಮುಂದುವರೆಯುತ್ತಿರುವುದು ನನ್ನ ಎದೆಗೆ ಇರಿದಂತಾಗುತ್ತದೆ..ನಾವು ನಮ್ಮ ಅಹಮ್ಮಿನ ಕೋಟೆಯಿಂದ ಈಚೆ ಬಂದು ಎಲ್ಲರೂ ಒಂದೇ ಎಂಬ ಮಾನವತೆಯನ್ನು ಮೆರೆದರೆ ಈ ಜಗತ್ತು ಎಂಥ ಸುಂದರವಾದೀತು?