Saturday, January 6, 2018
Caring for Customer
Thursday, January 9, 2014
ನಮೇಲಿನ ವಾಕ್ಯಗಳು ನನ್ನವೇ ಏನೋ ಅನ್ನುವಷ್ಟು ಹಿಂದೆ ಉಳಿದು ಬಿಟ್ಟಿದ್ದೇನೆ ಈ 5ವರ್ಷಗಳಲ್ಲಿ . ಯಾಕೆ ಆಲಸ್ಯತನ ?ಯಾಕೀ ಅಳಕ್ಷ್ಯತೆ ? ಇನ್ನಾದರೂ ಎದ್ದು ಗುರಿ ಮುಟ್ಟುವ ಬಲ ಬರಲಿ.
Thursday, October 16, 2008
ಕಾಲ ಓಡುವುದ ಬಲ್ಲ -->
ಅಲ್ಲಿಂದ ಇಂದಿನವರೆಗೆ ನಾನು ಕನಿಷ್ಠ ವಾರಕ್ಕೊಂದರಂತೆ ಮನಸ್ಸಿನಲ್ಲಿ ಸುತ್ತು ಹೊಡೆಯುವ ವಿಚಾರಗಳನ್ನು ಅಕ್ಷರಗಳಲ್ಲಿ ಹೆಣೆದಿದ್ದರೆ ಇಲ್ಲವೆಂದರೂ ೫೦ ಬೇರೆ ಬೇರೆ ಪುಟಗಳಿರುತ್ತಿದ್ದವು. ನನ್ನನ್ನೇ ನಾನು ಅವಲೋಕಿಸಿಕೊಳ್ಳಲು ಸರಳವಾದ ಕನ್ನಡಿ ಇರುತ್ತಿತ್ತು.ಹೀಗೆ ನಾನು ವ್ಯರ್ಥಯಿಸಿದ ಕಾಲವೇ ಒಂದು ಸಫಲ ಜೀವನ ಆಗಲು ಸಾಧ್ಯವಿತ್ತು.ಬಾರಿ ಬಾರಿ ಇಮೇಲ್ ಚೆಕ್ ಮಾಡುತ್ತಾ,ಒಂದೇ ರೀತಿಯ ಸುದ್ದಿ ಇರುವ ಎಲ್ಲ ಪತ್ರಿಕೆಗಳನ್ನು ಓದುತ್ತ ಹಾಳುಗೆಡಹುವ ಸ್ವಲ್ಪ ಸಮಯವಾದರೂ ಇಂಥ ಆತ್ಮತೃಪ್ತಿಯ, ಸ್ವಾಧ್ಯಯದ ಲಾಭಕ್ಕೆ ಎಡೆ ಮಾಡಿ ಕೊಟ್ಟಿರುತ್ತಿತ್ತು.
Thursday, November 22, 2007
ಬೀಳ್ಕೊಡುವ ದುಃಖ
ಇಂದು ದಾಟ್ಸ್ ಕನ್ನಡ.ಕಂ ನಲ್ಲಿ ತ್ರಿವೇಣಿಯವರ ವಿದಾಯದ ಲೇಖನ ಓದುತ್ತ ಹೀಗನಿಸಿತ್ತು." ಅಳುವುದು ನನಗೆ ಅಸಹ್ಯವೆಂದು ತಿಳಿದಿದ್ದರೂ ಅದು ತಾನೇ ತಾನಾಗಿ ಹೊರಬಿದ್ದ ಘಟನೆಗಳು ಎಷ್ಟೋ? ಮೊದಲ ಸಲ ಅಷ್ಟೊಂದು ನೋವಾಗಿ ಅತ್ತಿದ್ದು ಅಣ್ಣ ಸೈನಿಕ ಶಾಲೆಗೆ ಹೋದಾಗ,ಅಮ್ಮ ಅತ್ತದ್ದನ್ನು ನೋಡಲಾಗದೆ ನಾನು ಮತ್ತೆ ತಂಗಿ ರಾತ್ರಿ ಅಪ್ಪ ಅಮ್ಮರ ಪಕ್ಕ ಆಚೆ ಮುಖ ಮಾಡಿ ಮಲಗಿ ಅತ್ತದ್ದು ಅಪ್ಪನಿಗೆ ಹೇಗೋ ತಿಳಿದು ಬಿಟ್ಟಿತ್ತು. ಅದಾದ ಮೇಲೆ ಅತ್ತಿದ್ದು ನಮ್ಮ ಮನೆಯ ನಾಯಿಗೆ ಹುಶಾರಿರದ ದಿನ.ಆ ಪರಿ ನಾನು,ಅಣ್ಣ ತಂಗಿ ಮೂವರೂ ಅತ್ತಿದ್ದನ್ನು ನೋಡಿ ನಮ್ಮ ಶಾಲೆಯಲ್ಲಿ ಶಿಕ್ಷಕರು ,ಗೆಳತಿಯರು ನಾಯಿ ಎಂಬುದನ್ನು ತಪ್ಪಾಗಿ ತಿಳಿದು ಆಯಿ(ಅಜ್ಜಿ)ಗೆ ಹುಶಾರಿಲ್ಲವೆಂದು ತಿಳಿದಿದ್ದರು. ಮುಂದೆ ೧೦ನೇ ತರಗತಿಯಲ್ಲಿದ್ದಾಗ ಬೀಳ್ಕೊಡುವ ದಿನ ಅವತ್ತು ನನಗೆ ತಿಳಿಯದೆಯೇ ಕಣ್ಣಲ್ಲಿ ನೀರು ಬಂದು ಬಿಟ್ಟಿತ್ತು.ನಾನು ಆ ಪರಿ ಕಿತ್ತಾಡಿ ತೆಗೆದ ೩ ವರ್ಷಗಳು ಆ ಕೊನೆಯ ದಿನಕ್ಕೆ ತದ್ವಿರುದ್ಧವಾಗಿದ್ದವು.ಆಮೇಲೆ ಗೆಳತಿಯರು ನಾನು ತುಂಬಾ ಚೆನ್ನಾಗಿ ಮಾತನಾಡಿದೆ ಎಂದೂ, ನನ್ನ ಭಾವನೆ ನೋಡಿ ಅವರಿಗೆಲ್ಲ ಅಳು ಬಂತೆಂದೂ ಹೇಳುವದನ್ನು ಕೇಳಿ ನನಗೆ ನಾಚಿಕೆ, ನನ್ನ ಬಗ್ಗೆ ಕೀಳರಿಮೆ ಶುರು ಆಗಿತ್ತು.ನಾನು ಹೇಳಿದ್ದು ನಾನು ಅತ್ತಿದ್ದು ಶಾಲೆ ಬಿಟ್ಟು ಹೋಗಲು ಅಲ್ಲ ನನಗೆ ಪೂರ್ವಭಾವಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದದ್ದಕ್ಕೆ ಎಂದು ಸಾವರಿಸಿಕೊಂಡೆ .ಆದರೂಈಗ ಅನಿಸುತ್ತೆ ಅಳುವುದು ಮಾನವಸಹಜ ಎಂದು. ಮುಂದೆ ಧಾರವಾಡದಲ್ಲಿ ಒಬ್ಬಳೇ ಇರಬೇಕಾದಾಗ ಅತ್ತಿದ್ದು. ಎಂಜಿನೀಯರಿಂಗ್ ಮುಗಿಸಿ ಬಂದ ದಿನ ಅಷ್ಟೊಂದು ಓಡಾಡಿ ನಮ್ಮೂರಿಗೆ ಹೋಗುವ ದಿನ ಹತ್ತಿರವಯಿತೆಂದು ಖುಷಿಯಿಂದ ಅಪ್ಪನ ಜೊತೆ ಪರೀಕ್ಷೆ ಮುಗಿದ ದಿನವೇ ಓದಿ ಬಂದಿದ್ದೆ.ಆದರೂ ಅವತ್ತು ಬಂದು ನನಗೆ ಅರಿವಿಲ್ಲದೆ ಇಡೀ ರಾತ್ರಿ ಅತ್ತು ಬಿಟ್ಟಿದ್ದೆ.ಮನೆಯಲ್ಲಿ ಯಾರಿಗೂ ನನ್ನನ್ನು ರಮಿಸಲು ಸಾಧ್ಯವಾಗದೇ ಹೋಯಿತು.ಮತ್ತೆ ನನ್ನ ಗೆಳತಿ ಶೈಲಾ ಹಾಸ್ಟೆಲ್ ಬಿಟ್ಟು ವಾಪಸ್ ಊರಿಗೆ ಹೋದ ದಿನ ಕೂಡ ಅಷ್ಟೇ ..ಯಾಕೋ ಅಳುವುದು ಒಂದು ರೀತಿಯ ಹಿತದ ಅನುಭವವೇನೋ ಅನಿಸುವಷ್ಟು ಹತ್ತಿರವಾಯಿತು.ಹೀಗೆ ಕಣ್ಣಿಗೆ ಕಾಣುವ ಕಷ್ಟ ದು:ಖ ನೋಡಿ ಮನಸ್ಸು ದು:ಖಿಯಾಗಿ ಕಹಿಯಾಗಿ, ಖಿನ್ನವಾಗಿ ಅತ್ತ ದಿನಗಳೆಷ್ಟೋ?ಕೆಲವೊಮ್ಮೆ ನನ್ನ ಭ್ರಮೆಯಿಂದಾಗಿರುವ ನೋವಿಗಾಗಿ ಅತ್ತ ಕ್ಷಣಗಳೆಷ್ಟೋ? ಆದರೆ ಅದು ಮನಸ್ಸನ್ನು ಸ್ವಚ್ಛಗೊಳಿಸುವ ಒಂದು ಸರಳ ಮಾರ್ಗವೆಂದು ಈಗ ಅನಿಸುತ್ತಿದೆ.
Wednesday, November 14, 2007
ಎಲ್ಲರ ಅಮ್ಮ ಶ್ರೇಷ್ಥಳು
ಒಂದು ಅರಿವಾದರೂ ಮೂಡಿದ್ದು ಒಳ್ಳೆಯ ಹಾದಿಗೆ ನಾಂದಿ ಏನೋ:-)